ಅದೇ ತಾನೇ ಕವಿಗೋಷ್ಠಿಯನ್ನು ಮನೆಗೆ ಮರಳುತ್ತಿದ್ದೆ ಅಷ್ಟರಲ್ಲಿ ಜಂಗಮವಾಣಿಯ ರಿಂಗಣವಾಯಿತು.ಕಾವ್ಯ ತಾನು ಊರಿಗೆ ಹೋಗುತ್ತಿರುವುದಾಗಿ ಜೊತೆಗೆ ನನ್ನನ್ನು ಬರಲು ಕೇಳಿಕೊಂಡಳು.ಸರಿಯಾಗಿ ಮೂರು ಗಂಟೆಗೆ ಹೊರಡುವ ಬಸ್ ಗೆ ಬರಲು ಹೇಳಿದಳು.
ತುಂಬಾ ದಿನಗಳ ನಂತರ ಭೇಟಿಯಾಗುತ್ತಿರುವುದರಿಂದ ಮಾತುಗಳು ಸಾಕಷ್ಟು ಉಳಿದಿದ್ದವು.ಮೊಬೈಲ್ ನಲ್ಲಿ ಅಷ್ಟು ಮಾತಾಡಿದ್ದರೂ ನೇರವಾಗಿ ಮಾತನಾಡಿದ್ದು ಬಹಳ ಕಡಿಮೆ.ಬಡತನದಿಂದ ಬಂದ ಕಾವ್ಯ ತನ್ನ ಮನೆಯ ಜವಾಬ್ದಾರಿ ಹೊತ್ತಿದ್ದಳು.ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು.ನೋಡುವವರ ಕಣ್ಣಿಗೆ ನಾವು ಪ್ರೇಮಿಗಳಾಗಿದ್ದೆವು.ಅದಕ್ಕಾಗಿ ನೇರ ಭೇಟಿ ತುಂಬಾ ಕಡಿಮೆಯಾಗಿತ್ತು ಆದರೆ ಮೊಬೈಲ್ ನಲ್ಲಿ ತುಂಬಾ ಹತ್ತಿರವಾಗಿದ್ದೆವು.
ಕವಿಗೋಷ್ಠಿಯಿಂದ ಮನೆಗೆ ಬರುತ್ತದ್ದಂತೆ ಸಮಯವಾಗೇಬಿಟ್ಟಿತು.ಕೈಗೆ ಸಿಕ್ಕ 2-3 ಬಟ್ಟೆಗಳನ್ನು ಬ್ಯಾಗ್ ನಲ್ಲಿ ತುರಿಕಿಕೊಂಡು ಬೈಕ್ ಏರಿದ್ದೆ.ಆಗಾಗ ಟ್ರಾಪಿಕ್ ನಲ್ಲಿ ಸಿಲುಕಿದರೂ ಅವಕಾಶ ಸಿಕ್ಕಲ್ಲಿ ತೂರಿ ಮುಂದೆ ಹೊರಟೆ.ಅಷ್ಟರಲ್ಲಿ ಕಾವ್ಯ ಕರೆ ಮಾಡಿ ಬಸ್ಸು ನನ್ನ ಹಿಂದೆಯೇ ಬರುತ್ತಿರುವುದಾಗಿ ಹೇಳಿದಳು. ಸರ್ಕಲ್ ನಲ್ಲಿ ಸಿಗ್ನಲ್ ಕಂಡು ಬೈಕ್ ಅಲ್ಲೇ ಬಿಟ್ಟು ಬಸ್ ಏರಿದೆ.ಅವಳ ಪಕ್ಕದಲ್ಲಿ ಖಾಲಿ ಇದ್ದ ಸೀಟಿನಲ್ಲಿ ಕುಳಿತೆ.
ತಡವಾಗಿದ್ದಕ್ಕೆ ಸಾರಿ ಎಂದೆ ಆದರೆ ಹುಸಿಮುನಿಸಿನಿಂದ ಮುಖವನ್ನು ಕಿಡಕಿಯತ್ತ ತಿರುಗಿಸಿದ್ದಳು.ಆದರೂ ನಾನೇ ಮಾತು ಪ್ರಾರಂಬಿಸಿದೆ.ಕವಿಗೋಷ್ಠಿಯಿಂದ ಬರುವುದು ತಡವಾಯಿತು ಎಂದೆ.ಸರಿ ಎನ್ನುವಂತೆ ತಲೆಯಾಡಿಸಿದಳು.ಅಷ್ಟರಲ್ಲಿ ಅವಳ ಕಣ್ಣಲ್ಲಿ ನೀರು ಹನಿಯಿತು.ಇಷ್ಟಕ್ಕೆ ಅಳುವುದೇ ಎಂದು ಹೇಳಿ ಕಣ್ಣಿರು ಒರೆಸಲು ಪ್ರಯತ್ನಿಸಿದೆ.ಅವಳ ದುಃಖ ನಿಲ್ಲಲಿಲ್ಲ. ಕವಿಗೋಷ್ಠಿಯ ಎಲ್ಲ ಘಟನಾವಳಿಗಳನ್ನು ಕಣ್ ಕಟ್ಟುವಂತೆ ವಿವರಿಸಿದೆ.ನನಗೆ ನೀಡಿದ ಪ್ರಶಸ್ತಿಯನ್ನು ತೋರಿಸಲು ಬಯಸಿದೆ. ಅದು ಬೈಕ್ ನಲ್ಲೆ ಬಿಟ್ಟಿರುವುದಾಗಿ ಸರ್ಕಲ್ ನಲ್ಲಿದ್ದ ಬೈಕ್ ತೋರಿಸಿದೆ.
ತಡವಾಗಿದ್ದಕ್ಕೆ ಸಾರಿ ಎಂದೆ ಆದರೆ ಹುಸಿಮುನಿಸಿನಿಂದ ಮುಖವನ್ನು ಕಿಡಕಿಯತ್ತ ತಿರುಗಿಸಿದ್ದಳು.ಆದರೂ ನಾನೇ ಮಾತು ಪ್ರಾರಂಬಿಸಿದೆ.ಕವಿಗೋಷ್ಠಿಯಿಂದ ಬರುವುದು ತಡವಾಯಿತು ಎಂದೆ.ಸರಿ ಎನ್ನುವಂತೆ ತಲೆಯಾಡಿಸಿದಳು.ಅಷ್ಟರಲ್ಲಿ ಅವಳ ಕಣ್ಣಲ್ಲಿ ನೀರು ಹನಿಯಿತು.ಇಷ್ಟಕ್ಕೆ ಅಳುವುದೇ ಎಂದು ಹೇಳಿ ಕಣ್ಣಿರು ಒರೆಸಲು ಪ್ರಯತ್ನಿಸಿದೆ.ಅವಳ ದುಃಖ ನಿಲ್ಲಲಿಲ್ಲ. ಕವಿಗೋಷ್ಠಿಯ ಎಲ್ಲ ಘಟನಾವಳಿಗಳನ್ನು ಕಣ್ ಕಟ್ಟುವಂತೆ ವಿವರಿಸಿದೆ.ನನಗೆ ನೀಡಿದ ಪ್ರಶಸ್ತಿಯನ್ನು ತೋರಿಸಲು ಬಯಸಿದೆ. ಅದು ಬೈಕ್ ನಲ್ಲೆ ಬಿಟ್ಟಿರುವುದಾಗಿ ಸರ್ಕಲ್ ನಲ್ಲಿದ್ದ ಬೈಕ್ ತೋರಿಸಿದೆ.
ಆದರೆ ನಾನು ಬಸ್ ಏರುವ ಭರದಲ್ಲಿ ನಡೆದ ಅಪಘಾತದಲ್ಲಿ ಶರೀರವನ್ನು ಅಲ್ಲೇ ಬಿಟ್ಟಿದ್ದೆ.
✍ವೆಂಕಟೇಶ ಚಾಗಿ

Comments
Post a Comment
Comments here