Skip to main content

Posts

Showing posts from January, 2018

ಹನಿಗವಿತೆ

ಕಟ್ಟಲಾಗಿದೆ ಮನೆಯ ( ಕವನ)

**ಕಟ್ಟಲಾಗಿದೆ ಮನೆಯ** (ಕವನ) ಕಟ್ಟಲಾಗಿದೆ ಮನೆಯ ಮನೆ ಮನೆಗಳ ಮೇಲೆ ಬೀಸುವ ಗಾಳಿಯ ತಡೆದು ಆಗಸ ಮುಟ್ಟುವ ತನಕ ಮೋಡಗಳು ದಿಕ್ಕೆಡುವ ಹಾಗೆ ಕಟ್ಟಲಾಗಿದೆ ಮನೆಯ..|| ಕಟ್ಟಲಾಗಿದೆ ಮನೆಯ ಫಲವತ್ತಾದ ಭೂಮಿಯ ಮೇಲೆ ಚಿಗುರೊಡೆಯುವ ಬೀಜಗಳ ಮಣ್ಣು ಮಾಡಿ, ನೆಲದ ಮೇಲೆಲ್ಲ ಕಾಂಕ್ರೀಟ್ ಹಾಸಿಗೆಯ ಹಾಸಿ ಕಟ್ಟಲಾಗಿದೆ ಮನೆಯ..|| ಕಟ್ಟಲಾಗಿದೆ ಮನೆಯ ತಂಪು ನೆರಳನು ಬಿಸಿ ಮಾಡಿ ಗಿಡಮರಗಳ ಮಾರಣ ಹೋಮ ಮಾಡಿ, ಕೆರೆ ನದಿಗಳ ಹೊತ್ತಿ ಉರಿಸಿ ಕಟ್ಟಲಾಗಿದೆ ಮನೆಯ..|| ಕಟ್ಟಲಾಗಿದೆ ಮನೆಯ ನಿರ್ಮಲ ಸಾಗರದ ಮೇಲೆ ಜಲಚರಗಳ ಜಗವ ಮುಚ್ಚಿ, ಬೆಟ್ಟಗುಡ್ಡಗಳ ಸಮಗೊಳಿಸಿ ಹೆಸರೇ ಇಲ್ಲದಂತೆ ಮಾಡಿ ಕಟ್ಟಲಾಗಿದೆ ಮನೆಯ..|| ಕಟ್ಟಲಾಗಿದೆ ಮನೆಯ ಕಾನನದ ಮೃತ ದೇಹದ ಮೇಲೆ ರವಿಯ ಬೆಂಕಿ ಉಂಡೆಗಳ ನೆಲದ ಮೇಲೆ ಚೆಲ್ಲಿ, ಹುಲಿ ಸಿಂಹ ಕರಡಿಗಳ ಓಡಿಸಿ ಮಾನವೀಯತೆಯ ಮರೆತು ಕಟ್ಟಲಾಗಿದೆ ಮನೆಯ..|| ✍ವೆಂಕಟೇಶ ಚಾಗಿ ಲಿಂಗಸುಗೂರ Venkatesh.chagi1@gmail.com

ಕಗ್ಗಗಳು

*ವ್ಹಿಸಿ ಕಗ್ಗಗಳು* *ಪಾಪಗಳ ಗೈದು* *ಶಾಪಗಳ ಪಡೆದು* *ಗಂಗೆಯಲಿ ಮಿಂದೆದ್ದು ಬಂದೊಡೆ* *ಪಾವನವಾದೀತೆ ಈ ಕಾಯ ಪೆದ್ದು ಮನಸೇ*|| *ಜೊಳ್ಳು ಊಟವ ಮಾಡಿ* *ಪೊಳ್ಳು ದೇಹವ ಕಟ್ಟಿ* *ಸುಳ್ಳು ಜೀವನ ನಡೆಸಿದೊಡೆ* *ಕೊಳ್ಳಿ ಬಹುಬೇಗ ಈ ದೇಹಕೆ ಪೆದ್ದು ಮನಸೇ||* ✍ *ವೆಂಕಟೇಶ ಚಾಗಿ* *ಲಿಂಗಸುಗೂರ*

ಹನಿಕವಿತೆಗಳು

*ಹನಿಕವಿತೆಗಳು* **ಸತಿ** ಸತಿ ಮನೆಯಲ್ಲಿ ಇದ್ದರೆ ಅವನೊಬ್ಬ ಪತಿ.. ಸತಿ ಮನೆಯಲ್ಲಿ ಇರದಿದ್ದರೆ, ಅವನೊಬ್ಬ ಭೂಪತಿ..| **ದೀಪಾವಳಿ** ದೀಪಾವಳಿ ಗೆ ನನ್ನವಳು ಬರೆದ ಸಾಮಾನುಗಳ ಪಟ್ಟಿಯೋ ಅದೊಂದು ಹನುಮಂತ ನ ಬಾಲ, ಅದಕ್ಕೆ ನಾನು ಮೊದಲು ಮಾಡಲೇಬೇಕಾಯ್ತು ಸಾಲ..|| **ನನ್ನಾಕಿ** ಊರಾನ ಉಸಾಬರಿ ನಿಮ್ಗ್ಯಾಕ ಅಂತಾಳ ನನ್ ಹೆಂಡ್ತಿ.. ಆದರೂ ಊರಾನ ಸುದ್ದಿ ತರ್ತಾಳ ಕಂತಿ ತಂತಿ..|| **ರುಜು**  ಅಂಗೈ ಮೇಲೆ ನೀ ಹಾಕಿದ ರುಜು ಅಳಿಸಿತು ಅಂದೇ.. ಸ್ನೇಹ ಅಳಿಸಿದರೂ ಹೃದಯದ ಮೇಲೆ ಬರೆದ ನಿನ್ ಹೆಸರು ಅಳಿಯದೇ ನಾ ಬೆಂದೆ..|| **ಮುಂಗಾರು** ಬಣ್ಣ ಬಣ್ಣದ ಕನಸುಗಳ ಬಿತ್ತಿದೆ ನೀನಂದು.. ಅದೇಕೋ ನಾ ಅರಿಯೇ, ಕೈ ಕೊಟ್ಟಿತ್ತು ಮುಂಗಾರು ಮಳೆ ಬರದೇ ಮತ್ತೆಂದು..| ✍ವೆಂಕಟೇಶ ಚಾಗಿ ಲಿಂಗಸುಗೂರ 9611311195

ಬೆಳಗಿನ ಹನಿ

☘ *ಬೆಳಗಿನ ಹನಿ*💐☘ *ಜಾತಿ ಜಾತಿ ಎಲ್ಲ ಬ್ರಾಂತಿ* *ಕಂತಿ ಕಂತಿ ಮಾತನಂತಿ* *ಮಿಡಿಯುತಿಲ್ಲ ಮನದ ತಂತಿ* *ಮಾನವತೆಯ ಎಲ್ಲ ಕ್ರಾಂತಿ* *ಸೋರುವಂತ ಜಗದ ಜಂತಿ* *ಮುಗಿಯಿತಷ್ಟೆ ಜಗದ ಸಂತಿ* ✍ *ವ್ಹಿಸಿ* *ಸರ್ವರಿಗೂ ಶುಭೋದಯ* ☘🌿☘🌿☘🌴🌱🌱

ಹನಿಗವಿತೆ

💐 *ವ್ಹಿಸಿ ಹನಿಗವಿತೆಗಳು* 💐 *ರಿಜಲ್ಟು* ಬಂದೇ ಬಿಡ್ತು ರಿಜಲ್ಟು ; ಪೇಲಾದರೆ ಯಾಕೆ ಇನ್ಸಲ್ಟು ? ಪಾಸಾಗಲು ಮತ್ತೆ ಎಕ್ಷಾಮ್ ಕಟ್ಟು ; ಯಾರು ಬಲ್ಲರು ಮುಂದೆ ನೀನಾಗಬಹುದು ಹುಸೇನ್ ಬೋಲ್ಟು..!! ✍ ವೆಂಕಟೇಶ ಚಾಗಿ

ಕಗ್ಗಗಳು-೦೨

💐💐 *ವ್ಹಿಸಿ ಕಗ್ಗಗಳು*💐 (೧)  *ಮಾತಿನಲಿ ಮಿತಿಯಿರಲಿ* *ಮಾತಿನಲಿ ಸ್ಥಿರವಿರಲಿ* *ಮಾತಿನಲಿ ನಿಜವಿರಲಿ* *ಮಾತೆಂಬ ಮಾಣಿಕ್ಯ* *ಧರಿಸಿದೊಡೆ* *ಜಗದ ಮಾಣಿಕ್ಯ ನೀನಲ್ಲವೆ* *ಪೆದ್ದು ಮನಸೆ*|| (೨)  *ಆ ಜನ್ಮ ಈ ಜನ್ಮ* *ನೂರಾರು ಜನ್ಮಗಳಿಲ್ಲ* *ಜನ್ಮ ಜನ್ಮಾಂತರದ ಕಥೆಗಳು ನಿಜವಲ್ಲ* *ಜನ್ಮವೆತ್ತಿದ ಈ ಕಾಯಕಿಲ್ಲ ಮರುಜನ್ಮ* *ಇದೇ ಜನ್ಮ ಕೊನೆ ನಂಬು ಪೆದ್ದು ಮನಸೇ||* (೩)  *ಆಸೆ ಇಲ್ಲದ ಜೀವಿಯಿಲ್ಲ* *ಆಸೆ ಇಲ್ಲದೇ ಜೀವನವೇ ಇಲ್ಲ* *ಆಸೆ ಇಲ್ಲದೆ ಉರುಳಿದ ಕಾಲವೇ ಇಲ್ಲ* *ಆಸೆ ಎಂಬುದಕೆ ಅಂಕುಶವು ಇಲ್ಲದಿರೆ* *ಮನಸು ಅಶಾಂತಿಯ ಗೂಡು ಪೆದ್ದು ಮನಸೇ||* (೪)  *ಹರಿಯುವ ನೀರಿಗಿಲ್ಲ ಜಾತಿಯ ಭೀತಿ* *ಹರಿಯುವ ನೀರಿಗಿಲ್ಲ ಆಸೆ ಅಸೂಯೆ* *ಹರಿಯುವ ನೀರಿಗಿಲ್ಲ ಭ್ರಾಂತಿ ವಿಶ್ರಾಂತಿ* *ಹರಿಯುವ ಕಾಲದೊಂದಿಗೆ ಜೀವನವ ಹರಿಸಿ* *ಹರಿಯುವ ನೀರಿನಂತಾಗು ಪೆದ್ದು ಮನಸೇ||* ✍ *ವೆಂಕಟೇಶ ಚಾಗಿ* *ಲಿಂಗಸುಗೂರ*

ಕಗ್ಗಗಳು-೦೨

💐💐 *ವ್ಹಿಸಿ ಕಗ್ಗಗಳು*💐 (೧)  *ಮಾತಿನಲಿ ಮಿತಿಯಿರಲಿ* *ಮಾತಿನಲಿ ಸ್ಥಿರವಿರಲಿ* *ಮಾತಿನಲಿ ನಿಜವಿರಲಿ* *ಮಾತೆಂಬ ಮಾಣಿಕ್ಯ* *ಧರಿಸಿದೊಡೆ* *ಜಗದ ಮಾಣಿಕ್ಯ ನೀನಲ್ಲವೆ* *ಪೆದ್ದು ಮನಸೆ*|| (೨)  *ಆ ಜನ್ಮ ಈ ಜನ್ಮ* *ನೂರಾರು ಜನ್ಮಗಳಿಲ್ಲ* *ಜನ್ಮ ಜನ್ಮಾಂತರದ ಕಥೆಗಳು ನಿಜವಲ್ಲ* *ಜನ್ಮವೆತ್ತಿದ ಈ ಕಾಯಕಿಲ್ಲ ಮರುಜನ್ಮ* *ಇದೇ ಜನ್ಮ ಕೊನೆ ನಂಬು ಪೆದ್ದು ಮನಸೇ||* (೩)  *ಆಸೆ ಇಲ್ಲದ ಜೀವಿಯಿಲ್ಲ* *ಆಸೆ ಇಲ್ಲದೇ ಜೀವನವೇ ಇಲ್ಲ* *ಆಸೆ ಇಲ್ಲದೆ ಉರುಳಿದ ಕಾಲವೇ ಇಲ್ಲ* *ಆಸೆ ಎಂಬುದಕೆ ಅಂಕುಶವು ಇಲ್ಲದಿರೆ* *ಮನಸು ಅಶಾಂತಿಯ ಗೂಡು ಪೆದ್ದು ಮನಸೇ||* (೪)  *ಹರಿಯುವ ನೀರಿಗಿಲ್ಲ ಜಾತಿಯ ಭೀತಿ* *ಹರಿಯುವ ನೀರಿಗಿಲ್ಲ ಆಸೆ ಅಸೂಯೆ* *ಹರಿಯುವ ನೀರಿಗಿಲ್ಲ ಭ್ರಾಂತಿ ವಿಶ್ರಾಂತಿ* *ಹರಿಯುವ ಕಾಲದೊಂದಿಗೆ ಜೀವನವ ಹರಿಸಿ* *ಹರಿಯುವ ನೀರಿನಂತಾಗು ಪೆದ್ದು ಮನಸೇ||* ✍ *ವೆಂಕಟೇಶ ಚಾಗಿ* *ಲಿಂಗಸುಗೂರ*

ಮಂಗ & ಬೆಕ್ಕುಗಳು ( ಕಥಾಕವನ )

*ಕಥಾಕವನ* 💐*ಮಂಗ & ಬೆಕ್ಕುಗಳು* 💐 *ಇಬ್ಬರ ಜಗಳದಿ* *ಯಾರಿಗೆ ಲಾಭವು* *ಬನ್ನಿರಿ ನಾವು ತಿಳಿಯೋಣ* *ನೀತಿಯ ಸಾರುವ* *ಕಥೆಯನು ಕೇಳಿ* *ಜೀವನ ಸುಂದರಗೊಳಿಸೋಣ||* *ಸುಂದರವಾದ ಊರಿನಲಿ* *ಬೆಕ್ಕುಗಳೆರಡು ಜೊತೆಯಲ್ಲಿ* *ಆಡುತಲಿದ್ದವು ಅಲೆಯುತಲಿದ್ದವು* *ಬದುಕುತಲಿದ್ದವು ಸಂತಸದಿ||* *ಹಸಿವನು ನೀಗಲು ಒಂದುದಿನ* *ಬೆಕ್ಕುಗಳಿಗೆ ಅದು ಸುದಿನ* *ಪ್ರತಿಮನೆಯಲ್ಲೂ ಬೆಣ್ಣೆಕದ್ದವು* *ಮರದಡಿ ಬಂದು ಸೇರಿದವು||* *ಬೆಣ್ಣೆಯ ಆಸೆ ಹೆಚ್ಚಾಯ್ತು* *ಇಬ್ಬರ ಜಗಳವು ಶುರುವಾಯ್ತು* *ನನಗೂ ಜಾಸ್ತಿ ನಿನಗೂ ಜಾಸ್ತಿ* *ಬೆಣ್ಣೆಯು ಗೆಳೆತನ ಕೆಡಿಸಿತ್ತು||* *ಮರದಲಿ ಕುಳಿತಿರೊ ಮಂಗಣ್ಣ* *ನೋಡುತಲಿದ್ದನು ಜಗಳವನ್ನ* *ಉಪಾಯ ಹೂಡಿ ಮರದಿಂದಿಳಿದು* *ಬೆಣ್ಣೆಯ ಹಂಚುವ ಮಾತಾಡಿತ್ತು||* *ತನ್ನಿರಿ ಒಂದು ತಕ್ಕಡಿಯ* *ಮಾಡುವೆ ಬೆಣ್ಣೆ ಹಂಚಿಕೆಯ* *ಮಂಗನ ಮಾತನು ನಂಬಿದ ಗೆಳೆಯರು* *ತಂದವು ತಕ್ಕಡಿ ಜೊತೆಗೂಡಿ||* *ತೂಗಿದ ಬೆಣ್ಣೆಯ ಮಂಗಣ್ಣ* *ಹೆಚ್ಚಿನ ಬೆಣ್ಣೆಯ ನುಂಗಣ್ಣ* *ಆ ಕಡೆ ಜಾಸ್ತಿ ಈ ಕಡೆ ಕಡಿಮೆ* *ಬೆಣ್ಣೆಯ ನುಂಗಿದ ಮಂಗಣ್ಣ||* *ಮರವನು ಏರಿದ ಮಂಗಣ್ಣ* *ಪೆದ್ದ ಗೆಳೆಯರ ನೋಡಣ್ಣ* *ಇಬ್ಬರ ಜಗಳದಿ ಯಾರಿಗೋ ಲಾಭ* *ಈ ಕಥೆ ನೀತಿಯ ತಿಳಿಯಣ್ಣ||* ✍ *ವೆಂಕಟೇಶ ಚಾಗಿ* *ಲಿಂಗಸುಗೂರ*

*ಇಲಿ ಮತ್ತು ಸಿಂಹ*

*ಕಥಾಕವನ* *ಇಲಿ ಮತ್ತು ಸಿಂಹ* ಕಾಡಲಿ ಒಂದು ಮರವಿತ್ತು ಮರದಡಿ ಸಿಂಹವು ಮಲಗಿತ್ತು ಬೇಟೆಯನಾಡಿ ಬಳಲಿದ ಸಿಂಹಕೆ ಸವಿ ಸವಿ ನಿದಿರೆಯು ಆವರಿಸಿತ್ತು|| ಮರದಡಿ ಇಣುಕಿದ ಇಲಿಯೊಂದು ನೆಗೆಯುತ ಬಂದಿತು ಸಂತಸಗೊಂಡು ಬಾಲವ ಜಗ್ಗಿ ಮೈಯನು ಏರಿ ಸಿಂಹದ ಮೇಲೆ ಕುಣಿದಾಡಿತ್ತು|| ಸವಿ ಸವಿ ನಿದ್ದೆಯು ಮುಗಿದಿತ್ತು ಸಿಂಹವು ಕಣ್ಣನು ತೆರೆದಿತ್ತು ಬೆನ್ನಿನ ಮೇಲೆ ಕುಣಿಯುತಲಿದ್ದ ಇಲಿಯನು ಕೈಯಲಿ ಇಡಿದಿತ್ತು|| ಅಯ್ಯೊ ನನ್ನ ಬಿಟ್ಟುಬಿಡು ಕಾಡಿನ ರಾಜನೆ ದಯೆತೋರು ತನ್ನಯ ತಪ್ಪನು ಮನ್ನಿಸಿ ಇಂದು ಬಿಡಲು ಬೇಡಡಿತು ಇಲಿ ನೊಂದು|| ಸಿಂಹಕೆ ಕನಿಕರ ಮೂಡಿತ್ತು ಕೋಪವು ಮೆಲ್ಲನೆ ತಗ್ಗಿತ್ತು ಕಷ್ಟದಿ ನಿನ್ನನು ಕಾಪಾಡಿಹೆನು ಬದುಕಿಕೊ ಎಂದು ಬಿಟ್ಟಿತ್ತು|| ದಿನಗಳು ಹಾಗೆಯೇ ಉರುಳಿದವು ಸಿಂಹಕೆ ಹಸಿವು ಒಂದು ದಿನ ಬೇಟೆಯನಾಡುತ ಸಿಂಹವು ಒಂದು ಬಲೆಯಲಿ ಸಿಕ್ಕಿ ನರಳಿತ್ತು|| ಇಲಿಯದು ಛಂಗನೆ ಹಾರಿತ್ತು ಬಲೆಯಲಿ ಸಿಂಹವ ಕಂಡಿತ್ತು ಹಲ್ಲಲಿ ಬಲೆಯನು ಕಡಿದು ಹಾಕಿ ಸಿಂಹದ ಜೀವ ಉಳಿಸಿತ್ತು|| ಸಿಂಹಕೆ ಸಂತಸವಾಗಿತ್ತು ಇಲಿಯನು ಮುದ್ದಿಸಿ ನಲಿದಿತ್ತು ಒಬ್ಬರಿಗೊಬ್ಬರು ನೋವಲಿ ನಲಿವಲಿ ಬೆರೆವುದೇ ಜೀವನ ಎಂದಿತ್ತು|| ✍ವೆಂಕಟೇಶ ಚಾಗಿ ಲಿಂಗಸುಗೂರ

ವ್ಹಿಸಿ ಹನಿಗವಿತೆಗಳು

💐💐ವ್ಹಿಸಿ ಹನಿಗವಿತೆಗಳು💐💐 (೧) ಹೊಸ ವರ್ಷಕೆ ಬದಲಾಯಿತು ಗೋಡೆಯ ಮೇಲಿನ ಕ್ಯಾಲೆಂಡರ್; ಬದಲಾಗದ ಬದುಕಿಗೆ ಆಗಿರುವೆವು ನಾವು ಸರೆಂಡರ್..|| (೨) ನಡುರಾತ್ರಿಯಲಿ ಇವರದೇನು ಕಾರು-ಬಾರು ಗುಂಡಿನ ಮತ್ತಿನಲಿ ನಡೆದಿದೆ ಹೊಸ ವರ್ಷದ ಜೋರು..| (೩) ಮಾನವ ಲೋಕಕೆ ಹರ್ಷ ತಂದಿದೆ ನಿಸರ್ಗಕೆ ಅಲ್ಲದ ಈ ಹೊಸ ವರ್ಷ..| (೪) ಪ್ರಿಯೆ, ನೀ ನನ್ನ ಮರೆತ ದಿನಗಳಿಂದ ಹೊಸ ವರ್ಷಕೆ ಕಹಿ ನೆನಪುಗಳ ಕೊಡುಗೆ Free ಯೇ?!..|| (೫) ಬದುಕಿನಲ್ಲಿ ವರಿಗಳ ಕಿರಿಕಿರಿಗಳ ನಡುವೆ ಬಂದಿದೆ ಮತ್ತೊಂದು ಜನೇವರಿ..|| (೬) ಎಣ್ಣೆ ನೀರಿನೊಂದಿಗೆ ಸ್ನಾನ ಮಾಡಿದರೆ ಅದು ಯುಗಾದಿರೀ; ಎಣ್ಣೆ ನೀರಲಿ ಬೆರಸಿ ಸೇವನೆ ಮಾಡಿದೊಡೆ ಅದು ಜನೇವರಿರೀ ಜನೇವರಿ..|| (೭) ಆದೇಶವಿಲ್ಲದೇ ನಿರ್ದೇಶನವಿರದೆ ಕುಣಿದು ಕುಪ್ಪಳಿಸಿದ ಮಕ್ಕಳ ಈ ಕುಂಭ; ಹೊಸ ವರ್ಷದ ಆರಂಭ..|| (೮) ಬದಲಾಗಬೇಕು ಆಗಾಗ ಆಗಾಗ; ಬದಲಾಯಿಸಬೇಕು ಆಗಾಗ ಆಗಾಗ; ಇಲ್ಲದಿದ್ದರೆ ಹೊಸ ವರ್ಷ ಬರುವುದು ಯಾವಾಗ..|| ✍ವೆಂಕಟೇಶ ಚಾಗಿ ಲಿಂಗಸುಗೂರ