Skip to main content

Posts

Showing posts from March, 2018

ಹತ್ತು ಹೈಕುಗಳು

**ಹತ್ತು ಹೈಕುಗಳು** ೧) 'ಗಲ್ಲಾ'ಪೆಟ್ಟಿಗೆ ತುಂಬಿದಷ್ಟು ಬರಿದಾಗುತೈತಿ..!! ೨) ಬಾರಕೋಡ್ ಯುಗದಲ್ಲಿ ಬಾರಕೋಲ್ ಮರೆಯಾಗೈತಿ..!! ೩) ಹಣಿಮ್ಯಾಲ ಕುಂಕುಮ ಹಚ್ಚಿಲ್ಲ ; ಅಂಟೈತಿ..!! ೪) ನಾವು ನೀವು ಬೆವುರೊದು ಮುಖ್ಯ ಅಲ್ಲ ; ಮೋಡ ಬೆವರಬೇಕಾಗೈತಿ..!! ೫) ಬ್ಯಾಸಗಿ ದಿವಸದಾಗ ನಾ ಬರೆದ ಅಕ್ಷರಾನು ಬೆವರ್ಯಾವ..!! ೬) ಒಳ್ಳಿ ನೋಡಿದ ಮಳ್ಳಿ ; ಅವಳ ; ಮನಸ ಕದ್ದ ಕಳ್ಳಿ..!! ೭) ಗುಡ್ಯಾಗಿನ ದೇವರಿಗೂ ಬೇಕಾಗೈತಿ ಎಸಿ..!! ೮) ಓದಿರೋರು ಗೋಡೆಮ್ಯಾಲಿನ ಬರಹ , ಬರೀ ಓದಿದ್ರು ಅಷ್ಟೇ..!! ೯) ನೀರಾಗಷ್ಟ ಸುಳಿ ಇಲ್ಲ ಜೀವನದಾಗೂ ಅವ.!! ೧೦) ಮಹಾತ್ಮರೆಲ್ಲಾ ಹೇಳೊದೆಲ್ಲಾ ಹೇಳ್ಯಾರ..; ನಾವ್ ಮಾಡೋದು ಬಾಕಿ ಐತಿ..!! ✍ ವೆಂಕಟೇಶ ಚಾಗಿ For more visit Vcsahitya.blogspot.in

ಹನಿಗಾರಿಕೆ - ೧

*ಪಪ್ಪಾ* ಯಾರೋ ನನ್ನ ಮಗನಿಗೆ ಕೇಳಿದರು "ನಿನ್ನ ಪಪ್ಪಾನ ಹೆಸರನಪ್ಪಾ.?" ಮಗನ ಸಿಹಿಯಾದ ಉತ್ತರ ಹೀಗಿತ್ತು, "ನನ್ನ ಪಪ್ಪಾನ ಹೆಸರು ಪಪ್ಪಾ..!!" For more visit Vcsahitya.blogspot.in

ಹೈಕುಗಳು - 4

ಹೈಕುಗಳು* ೧) ಬಡಗಿ ಮೇಷ್ಟ್ರು ಬಡ ಮೇಷ್ಟ್ರು..!! ೨) ' ಕತ್ತೆ 'ಎಂದ ಮೇಷ್ಟ್ರು ಮಾತು ನಿಜ ; ಸಂಸಾರದಲ್ಲಿ ನಾ ಕತ್ತೇನೆ..|| ೩) ನಾ ಜಾಣ ; ಅದಕ್ಕೆ ಹೆಂಡತಿಯ ಮಾತಿನ ಪೆಟ್ಟು..|| ೪)  ಸಂಸಾರದಲ್ಲಿ ಹುಡುಕಬೇಕಿದೆ Some ಸಾರ..|| ೫) ಅವಳ ಮಾತು ಕತ್ತಿಗಿಂತ ಹರಿತ..!! ✍ ವ್ಹಿಸಿ For more Visit Vcsahitya.blogspot.in

ಮೂರು ಹನಿ

**ಮೂರು ಹನಿ** ೧) ಎಲ್ಲ ಕವಿಗಳು ಮಾಡುತ್ತಿದ್ದರು ತಮ್ಮ ತಮ್ಮ ಕವನಗಳ ವಾಚನ..; ಕೇಳುಗಳರು ಆಗಾಗ ನೋಡಿಕೊಳ್ಳುತ್ತಿದ್ದರು ತಮ್ಮ ತಮ್ಮ ವಾಚನ್ನ..|| ೨) ನನಗೆ, ಗೊರಕೆಯ ನಿಲ್ಲಿಸಬೇನ್ನುವ ಬಯಕೆ.. ಬಂದಾಗಲೆಲ್ಲ ಈ ಬಯಕೆ., ನಿದ್ದೆಯಲ್ಲೆ ಅದರ ಕನವರಿಕೆ..|| ೩)  ದೇವರಿಗೆ ಅದೇಷ್ಟು ತೀರಿಸುವಳು ಹರಕೆ ನನ್ನಾಕೆ.!!? ಕಾರಣ ಇರಬಹುದೇ ನನ್ನ ಗೊರಕೆ..|| ✍ ವ್ಹಿಸಿ

ನಾ ಬೆಳೆಯಲಾರೆ - ಕವನ

**ನಾ ಬೆಳೆಯಲಾರೆ** ನಾ ಬೆಳೆಯಲಾರೆ ಆ ರವಿಯ ಬೆಳಕು ಮೂಡಿ ಕತ್ತಲು ಸರಿದು ಚೇತನವು ಎಲ್ಲ ಎಲೆಗಳಲಿ ತುಂಬುವ ತನಕ.. ಹಸಿರು ಮೂಡುವ ತನಕ..|| ನಾ ಬೆಳೆಯಲಾರೆ ಕಲುಷಿತ ನೀರಿಂದ ವಿಷ ಹೊರ ಹೋಗುವ ತನಕ ಆಗಸವು ಸುರಿದ ಶುದ್ದ ನೀರಲಿ ಮೈದೊಳೆದು ಮನಸಾರೆ ಕುಡಿಯುವ ತನಕ ದಾಹ ನೀಗುವ ತನಕ...|| ನಾ ಬೆಳೆಯಲಾರೆ ಬರಡು ಭೂಮಿಯಲಿ ಸಾರ ಸತ್ವ ತುಂಬುವ ತನಕ.. ನಿಜ ಖನಿಜಗಳ, ಜೀವ ಕಸದ ರಸಾಯನ ಕಲಸುವ ತನಕ ಹಸಿವು ನೀಗುವ ತನಕ...|| ನಾ ಬೆಳೆಯಲಾರೆ ಮೈಮೇಲೆ ಬಿದ್ದ ಬಣ್ಣ ಮಾಸುವ ತನಕ.. ಸುತ್ತ ಹರಡಿರುವ ಮುಳ್ಳುಗಳ ದೂರ ದೂಡುವ ತನಕ ಮನದ ಅಷ್ಠಗಳ ಅಳಿಸುವ ತನಕ..|| ✍ ವೆಂಕಟೇಶ ಚಾಗಿ ಲಿಂಗಸುಗೂರ

ನಾಳೆಯೆಂಬುದು - ಕವನ

*ನಾಳೆಯೆಂಬುದು* ನಾಳೆಯೆಂಬುದು ಒಂದು ಖಂಡಿತ ಬರವುದು ಎಂದು ಕೊರಗದಿರು ಓ ಮನವೇ ಕಳೆದು ಸಮಯವಿಂದು | ನಾಳೆ ಏನಾಗುವುದೋ ಎಲ್ಲ ಮುಗಿದೊಗುವುದೋ ಮತ್ತೆ ಮತ್ತೆ ಅನ್ನದಿರು ಕಳೆದು ಸಮಯವಿಂದು | ನಾಳೆಯ ಸುಖ ದುಃಖಗಳ ನಾಳೆಯ ಬಯಕೆಗಳ ಲೆಕ್ಕಿಸಿ ಗತಿಗೆಡದಿರು ಕಳೆದು ಸಮಯವಿಂದು | ನಾಳೆ ನೀ ನಗಬಹುದು ಅಳುವೂ ಜೊತೆಗಿರಬಹುದು ಇಂದು ಕೊಲ್ಲುವುದೇಕೆ ಕಳೆದು ಸಮಯವಿಂದು.| ಇಂದು ಬಂದಿದೆ ನಿನಗೆ ಬಂದುದೆಲ್ಲವೂ ನಿನಗೆ ಇಂದು ನೀ ಮಗುವಾಗು ಕಳೆದು ಸಮಯವಿಂದು ..|| -ವೆಂಕಟೇಶ ಚಾಗಿ ಲಿಂಗಸುಗೂರ

ಪುಟ್ಕತೆ - ಕಸ

#ಪುಟ್ಕತೆ ಕಸ   ಅದೊಂದು ಜನನಿಬಿಡ ಪ್ರದೇಶ. ಯಾರಿಗೂ ಸ್ವಲ್ಪ ನಿಲ್ಲುವಷ್ಟು ತಾಳ್ಮೆ ಇರಲಿಲ್ಲ.ಎಲ್ಲೆಂದರಲ್ಲಿ ಬಿದ್ದ ರಾಶಿ ಕಸ . ಅದನ್ನೇ ತುಳಿದು ಓಡಾಡುತ್ತಿರುವ ಜನ. ಕಸದ ರಾಶಿಯಲ್ಲೇ ತುತ್ತು ಕೂಳು ಹುಡುಕುತ್ತಿರುವ ಹಂದಿಗಳು ನಾಯಿಗಳು. ಅದರಲ್ಲೆ ಹರಿದು ಹಾಕಿದ ಹಾಳೆಗಳು.  ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ನಿರುದ್ಯೋಗಿ ಯುವಕನಿಗೆ ಕಸದ ರಾಶಿಯಲ್ಲಿದ್ದ ಹಾಳೆಗಳು ಕೈ ಬೀಸಿ ಕರೆದಂತಾಯಿತು. ಕೈಗೆ ಸಿಕ್ಕಿದ ಹಾಳೆಯನ್ನು ಓದತೊಡಗಿದ. ಎರಡು ಮೂರು ಹಾಳೆಗಳನ್ನು ಓದಿದೊಡನೇ ಕಸದಲ್ಲಿ ಬಿದ್ದ ಎಲ್ಲ ಹಾಳೆಗಳನ್ನು ಸಂಗ್ರಹಿಸಿದ. ಅಲ್ಲೇ ಇದ್ದ ಬೀಡಾ ಅಂಗಡಿಯವನು ಇವನನ್ನು ಬೈದು, ಅದಾವುದೋ ಬಿದ್ದು ಹೋಗಿದ್ದ ಮನೆಯ ಹಳೇ ಕಾಲದ ಹಾಳೆಗಳನ್ನ ಆರಿಸದಂತೆ ಹಾಗೂ ಅದರಿಂದ ಏನೂ ಉಪಯೋಗ ಇಲ್ಲವೆಂದರೂ ಆ ಯುವಕ ಒಂದು ಚೂರು ಹಾಳೆ ಬಿಡದೆ ತನ್ನ ಮನೆಗೆ ತೆಗೆದುಕೊಂಡು ಹೋದ. ಅಲ್ಲಿ ಇಲ್ಲಿ ಸಾಲ ಮಾಡಿ ಎಲ್ಲಾ ಹಾಳೆಗಳಲ್ಲಿದ್ದ ಸಾಹಿತ್ಯವನ್ನು ಅನಾಮಿಕನ ಹೆಸರಲ್ಲಿ ಪುಸ್ತಕ ಪ್ರಕಟಿಸಿದ. ಅದರಲ್ಲಿದ್ದ ಅದ್ಬುತ ಸಾಹಿತ್ಯ ಸಾಕಷ್ಟು ಜನರನ್ನು ಸೆಳೆದಿತ್ತು. ಹಲವಾರು ಮರುಮುದ್ರಣ ಕಂಡ ಆ ಪುಸ್ತಕದಿಂದಾಗಿ ನಿರುದ್ಯೋಗಿ ಯುವಕ ಶ್ರೀಮಂತ ವ್ಯಕ್ತಿಯಾದ. ಕಸವಾಗಿದ್ದ ಹಾಳೆಗಳು ನಿರುದ್ಯೋಗಿ ಯುವಕನ ನಾಳೆಗಳನ್ನು ಬದಲಾಯಿಸಿದ್ದವು. ✍ವೆಂಕಟೇಶ ಚಾಗಿ ಲಿಂಗಸುಗೂರ

ಹನಿಗವಿತೆಗಳು-೪

*ವ್ಹಿಸಿ ಹನಿಗವಿತೆಗಳು* ೧) ಅವಳು, ಆಗಾಗ ಒಳ್ಳಿ ನೋಡಬೇಕೆನಿಸುವ ಸುಂದರವಾದ ಹೂ ಬಳ್ಳಿ..|| ೨) ಸ್ವಚ್ಛಂದದ ನನ್ನ ಮನಸಿಗೆ, ಆಯಿತು ಒರಳು.. ಆ ನಿನ್ನ ಮುಂಗುರುಳು..|| ೩) ನನ್ನೆಲ್ಲಿ ಹುಡುಕುವೆ ಓ ನಲ್ಲೇ.. ನಿನ್ನ ಮನವ ಇಣುಕು, ನಾನಿರುವೆ ಅಲ್ಲೇ..|| -ವ್ಹಿಸಿ

ಮತ್ತೆ ಬಂದಿದೆ ಯುಗಾದಿ

*ಯುಗಾದಿಯ ಶುಭಾಶಯಗಳು* **ಮತ್ತೆ ಬಂದಿದೆ ಯುಗಾದಿ** ಮತ್ತೆ ಬಂದಿದೆ ಯುಗಾದಿ ಹರುಷ ತಂದಿದೆ ನಮಗಾಗಿ ಚಿಗುರು ತುಂಬಿ ಚೆಲುವ ಚೆಲ್ಲಿ ಹೊಸ ಸಂಭ್ರಮ ತಂದಿದೆ..|| ರೆಂಬೆ ಕೊಂಬೆ ಚಿಗುರು ಚಿಮ್ಮಿ ಹಕ್ಕಿ ದ್ವನಿಗೆ ಸ್ವರವು ತುಂಬಿ ಯುಗದ ಆದಿ ಬಂದಿದೆ ಯುಗಾದಿ ಮರಳಿ ಬಂದಿದೆ..|| ಬೇವು ಬೆಲ್ಲ ಜೊತೆಗೆ ಸೇರಿ ಸುಖ ದುಃಖಕೆ ನಾಂದಿ ಹಾಡಿ ನವ ಜೀವನದ ಸೆಲೆಯ ತಂದು ಯುಗಾದಿ ಮರಳಿ ಬಂದಿದೆ..|| ಹೃದಯಗಳನು ಬೆಸೆಯುತಿದೆ ಬಯಕೆಗಳನು ಮೂಡಿಸಿದೆ ಹೊಸ ಬದುಕಿಗೆ ಉಸಿರು ತುಂಬಿ ಯುಗಾದಿ ಮರಳಿ ಬಂದಿದೆ..|| ಮೇಘಗಳಲಿ ಮಿಂಚಿದೆ ಧರೆಯು ಹನಿಗೆ ನನೆದಿದೆ ಮಣ್ಣಿನಲ್ಲಿ ಜೀವ ಬಿತ್ತಿ ಯುಗಾದಿ ಮರಳಿ ಬಂದಿದೆ..|| - ✍ ವೆಂಕಟೇಶ ಚಾಗಿ ಲಿಂಗಸುಗೂರ Vcsahitya.blogspot.in

ಹನಿಗವಿತೆಗಳು 5

**ವ್ಹಿಸಿ ಹನಿಗವಿತೆಗಳು** ೧) 'ರೇನ್ ರೇನ್ ಗೋ ಅವೇ' ಎಂದು ಮಕ್ಕಳೇಕೆ ಹಾಡಿದರೋ..; ರೇನ್ ಕಾಣದೇ ಮಕ್ಕಳು, ಬಿಸಿಲಲ್ಲಿ ಆಡುತಿಹರು..| ೨) ಬಿತ್ತಿ ಬೆಳೆಯುವ ಭೂಮಿ ಈಗೆಲ್ಲಾ ಬರೀ ಸೈಟು ಸೈಟು..; ಅದಕ್ಕೆ ಏನೋ, ತುತ್ತು ಅನ್ನಕೂ ಇಲ್ಲಿ ಆಕಾಶದೆತ್ತರದ ರೇಟು ರೇಟು..|| ೩) ಮೋಡಗಳಿಗೂ ಗಿಡಗಳಿಗೂ ಅದೇನು ನಂಟು.? ಗಿಡಗಳ ಕಾಣದೇ ಓಡುತಿವೆ ಮೋಡಗಳು ಹುಡುಕುತ್ತಾ ಹುಡುಕುತ್ತಾ ಗಿಡಮರಗಳ ಟೆಂಟು..|| ✍ ವೆಂಕಟೇಶ ಚಾಗಿ ಲಿಂಗಸುಗೂರ

ಪುಟ್ಕತೆ - ಪಾರ್ಟಿ

#ಪುಟ್ಕತೆ    ಅದೊಂದು ಅಪರೂಪದ ಪಾರ್ಟಿ. ಆ ನಗರದ ಪ್ರಮುಖ ಕಂಪನಿಯ ಸುಂದರವಾದ ಪಾರ್ಟಿ. ಎಲ್ಲರೂ ಶ್ರೀಮಂತರೇ . ಎಲ್ಲರೂ ತಮ್ಮ ತಮ್ಮ ವ್ಯವಹಾರದಲ್ಲೇ ಮಗ್ನರಾಗಿದ್ದರು. ಪರಿಚಿತರಾದರೂ ಅಪರಿಚಿತರಂತೆ . ಕಿವಿಯಲ್ಲಿ ವಿದೇಶಿ ಹಾಡುಗಳ ಗುಂಗುನ.   ಅಷ್ಟರಲ್ಲಿ ಬಂದ ಒಬ್ಬ ಯುವಕ ತನ್ನ ಹಾಡುಗಳಿಂದ ಎಲ್ಲರನ್ನೂ ರಂಜಿಸತೊಡಗಿದ. ಎಲ್ಲರೂ ಅವನ ಕಲೆಗೆ ತಲೆಬಾಗಿದರು. ಕೆಲವರಂತು ಅವನ ಮೇಲೆ ಹಣದ ಸುರಿಮಳೆಯನ್ನೆ ಸುರಿಸಿದರು. ಎಲ್ಲರೂ ಹೊಗಳಿದ್ದೆ ಹೊಗಳಿದ್ದು. ಕೆಲವರಿಗಂತು ಅವರ ಜೀವನದಲ್ಲಿ ಅದೊಂದು ಮರೆಯದ ಸಮಯವಾಯಿತು.  ಎಲ್ಲರಿಗೂ ಅಪರಿಚಿತನಾಗಿದ್ದ ಆ ಯುವಕ ಪರಿಚಿತನಾದ. ಆ ಕಂಪನಿಯ ಬಾಸ್ ತುಂಬಾ ಸಂತೋಷದಿಂದ ಉಡುಗೊರೆಯನ್ನು ನೀಡಿ ಯಾರಪ್ಪ ನೀನು ಎಂದು ಕೇಳಿದ.ಆಗ ಆ ಯುವಕ 'ಸಾರ್, ನಾನು ನಿಮ್ಮ ಕಂಪನಿಯ ಜವಾನ ಎಂದ"‌. **ಕಲೆಗಿದೆ ಬೆಲೆ ** ✍ ವೆಂಕಟೇಶ ಚಾಗಿ ಲಿಂಗಸುಗೂರ

ಹಾಯ್ಕುಗಳು

**ಹಾಯ್ಕುಗಳು**  ೧) ಮಗು ಅತ್ತಿತು ; ಅವರು ನಕ್ಕರು..!! ೨) ಅದೊಂದು ಬಳಗ ; ಜಗಳ ..ಒಳಗೊಳಗ..!! ೩) ಜನರ ಹಬ್ಬ ಮುಗಿಯಿತು ; ಈಗ ಜನನಾಯಕರದ್ದು..!! (೪) ಮಳೆ ,ನನ್ನ ನೆನಸಿದರೂ ನಾ ನೆನದದ್ದು ನಿನ್ನ..!! (೫) ಈಗೆಲ್ಲ ಪರಿಚಯವಾಗೊದು ಕೆಲಸದಿಂದಲ್ಲ..! ಪ್ಲೆಕ್ಸ್ ಗಳಿಂದ..!! (೬) ಈಗಲೂ ಇದೆ ಒಡೆದು ಆಳುವ ನೀತಿ..!! (೭)  ಮೋಡಗಳು ಓಡುತಿವೆ; ಸೆಕೆ ತಾಳಲಾರದೆ..!! -ವ್ಹಿಸಿ

ಹೂವಾಗಿ ಅರಳಿ (ಕಥೆ)

*ಹೂವಾಗಿ ಅರಳಿ* ಕಥೆ ಬೆಳಗಿನ ೬ ಗಂಟೆಯ ಸಮಯ..ಕಣ್ಣಲ್ಲಿ ಇನ್ನೂ ನಿದ್ದೆ ಮಂಪರು.ಆದರೂ ಕಣ್ತೆರೆಯುವಂತೆ ಮಾಡಿತ್ತು ಮೊಬೈಲ್. ಯಾರದೋ ಮೆಸೆಜ್ ಬಂದಿರುವ ರಿಂಗ್ ಟೋನ್ ಆಗಾಗ ಕೇಳಿಸುತ್ತಿತ್ತು.ಚಳಿಗಾಲದ ಚಳಿಯಲ್ಲಿ ಮುದುಡಿಕೊಂಡು ಮಲಗಿದ್ದ ನಾನು ಮನಸ್ಸಿಲ್ಲದೇ ಕಣ್ತೆರೆಯಬೇಕಾಯಿತು.ಒಂಟಿ ಕಣ್ಣು ತೆರೆದು ಮೊಬೈಲ್ ತಡಕಾಡಿದೆ.ಮೆಸೆಜ್ ಟೋನ್ ನ ಶಬ್ದ ಮೊಬೈಲ್ ನ್ನು ಬೇಗ ಕೈಗೆ ಸಿಗುವಂತೆ ಮಾಡಿತ್ತು.ಆನ್ ಮಾಡುತ್ತಿದ್ದಂತೆ ಸುಮಾರು ೧೦ ಮೆಸೆಜ್ ಗಳಲ್ಲೂ ಸಾರಿ ಸಾರಿ ಸಾರಿ... ಹಿಂದಿನ ದಿನ ಸರಿ ರಾತ್ರಿ ೧೨ ರವರೆಗೂ ಮೊಬೈಲ್ ನಲ್ಲೇ ಚಾಟಿಂಗ್ ನಡೆದಿತ್ತು.ಸಲಿಗೆಯ ಕಾರಣದಿಂದೆನೋ ನಾನು ಐ ಲವ್ ಯು ಎಂದು ರಿಪ್ಲೆ ಮಾಡಿದ್ದೆ.ಅವಳಿಗೆ ಅದೇಕೊ ಬೇಸರ ತರಿಸಿತ್ತೋ ಏನೋ  ಚೆನ್ನಾಗಿ ಬೈದಿದ್ದಳು.ಆದರೆ ಮರುದಿನ  ೧೦ ಮೆಸೆಜ್ ಕಳಿಸಿದ್ದಳು. " ನೀನು ಎಲ್ಲ ಹುಡುಗರಂತೆ" ," ನೀನು ಇಂಥವನೆಂದು ಅಂದುಕೊಂಡಿರಲಿಲ್ಲ" " ನಮ್ಮ ಸ್ನೇಹಕೆ ನೀನು ಮಸಿ ಬಳಿದೆ" ಎಂದೆಲ್ಲಾ ರಿಪ್ಲೆಗಳು ಬರತೊಡಗಿದ್ದವು. OK ಮಾ ಐ ಆ್ಯಮ್ ಸಾರಿ ಎನ್ನುತ್ತಾ ಸುಮ್ನೆ ಕಿಂಡಲ್ ಮಾಡಿದೆ ಎಂದು ಹೇಳಿ ಚಾಟಿಂಗ್ ಗೆ ಕೊನೆ ಹೇಳಿದ್ದೆ.    ನೇಹಾ ಮತ್ತು ನಾನು ಒಂದೇ ದಿನ ಕೆಲಸಕ್ಕೆ ಸೇರಿದ್ದೆವು.ದೂರದ ಊರಿನಿಂದ ಬಂದು ಕೆಲಸಕ್ಕೆ ಸೇರಿದ್ದ ನಾವು ಅಂದಿನಿಂದ ಪರಿಚಿತರಾಗಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಕೆಲಸದಲ್ಲಿ ಬರುವ ತೊಂದರೆಗಳಿಗೆ ,ಪ್ರಶ್ನ...

ಬಿಡುಗಡೆ

*ಬಿಡುಗಡೆ* ಸುತ್ತ ಮುತ್ತಲೂ ಕಿಕ್ಕಿರಿದ ಜನರ ಜಂಗುಳಿ ಎಲ್ಲರಲೂ ಮೌನ.. ಮೌನದೊಳಗೂ ಆಗಾಗ ಬರುವ ಪಿಸುಮಾತುಗಳು, ಮರೆಯಲ್ಲಿ ಮತ್ತಷ್ಟು ಪ್ರಶ್ನೆಗಳು ; ಅಯ್ಯೋ ಪಾಪ ಮತ್ತೆರಡು ಕಣ್ಣಿಂದ ಹನಿ. ಪಕ್ಕದ ಬೀದಿಯಲೋ ಹಬ್ಬದ ಹೋಳಿ, ಆದರಿಲ್ಲಿ ಮೌನ..| ಅತ್ತವರ ಹರಟೆ ಕರುಳ ಬಳ್ಳಿಗಳಿಗೆ ಬೇಗ ಮುಗಿಸುವ ಭರಾಟೆ. ಮುಡಿಗಿಷ್ಟು ಹೂವ ಕೊಡದವರು ಈಗ ಮೈ ತುಂಬ ಮಾಲೆಗಳ ಭಾರ.. ಕಣ್ಣುಗಳು ಕಾಣಿಸವು ಕಿವಿಗಳು ಕೇಳುತ್ತಿಲ್ಲ ಮಾತುಗಳು ಮರೆಯಾಗಿ ಎಲ್ಲ ಮೌನ ಮೌನ.. ಚಿರಮೌನದ ಹೊದಿಕೆಯೊಳಗೆ ಬಂದಿ , ಆದರೂ ಬಿಡುಗಡೆ ಭವಬಂಧನಗಳಿಂದ ಅಜ್ಜಿ ಮೀನಮ್ಮಳಿಗೆ..|| - ವ್ಹಿಸಿ

ಹೈಕುಗಳು - ೨

*ವ್ಹಿಸಿ ಹೈಕುಗಳು* ೧) ಕಾಮನನ್ನು ಸುಟ್ಟರು ಕಾಮವನ್ನಲ್ಲ..!! ೨) ಕಪ್ಪು ಕಾಣದಿರಲು ಬೇಕಿತ್ತು ಮೇಕಪ್ಪು ; ಮೇಕಪ್ಪಿನಲ್ಲು ಬೇಕಾಯ್ತು ಕಾಡಿಗೆ ಕಪ್ಪು..!!  ೩) ನಾ ಸಾಧಿಸುವುದು ಏನಿಲ್ಲ ಕಾರಣ, ನೀ ಇಲ್ಲ..!! ೪) ನಾ, ನಿನ್ನ ಸುತ್ತ ತಿರುಗುವ ಗ್ರಹ ಅನ್ನಬೇಡ ಇದಾವ ಗ್ರಹಚಾರ..!! ೫) ಪರಿಚಯ; ಸ್ನೇಹ ; ಪ್ರೀತಿ ; ಮುಂದ..?...ಪಜೀತಿ..!! ೬) May ಯಲ್ಲಿ ಆಯ್ತು ಕಪ್ಪು ; ಕಪ್ಪು ಮುಚ್ಚಿತು ಮೇಕಪ್ಪು..!!